ಆಗಸ್ಟ ೧೫ದು ಸ್ವಾತಂತ್ರ ದಿನದಂದು ಬರೆದಿದ್ದ ಒಂದು ಕವಿತೆ.. ಇದುವರೆಗು ಎಲ್ಲೊ publish ಮಾಡಿರಲಿಲ್ಲ, ಇಂದು ಇಲ್ಲಿ publish ಮಾಡೊಣ ಅಂತ ಮಡ್ತಾ ಇದ್ದಿನಿ.. ಎಲ್ಲರು ತಮ್ಮ ಅನಿಸಿಕೆಗಳನ್ನು ತಿಳಿಸುತ್ತಿರೆಂದು ಬಾವಿಸಿರುತ್ತೆನೆ.
ಮನಸುಗಳು ಮನಸ್ಸ ಮುರಿಯುತ್ತಿಹ
ಭಾವನೆಗಳ ಭಾವವು ಬಾಡುತ್ತಿಹ
ದುರಾಸೆಯು ಮೋಹದಿ ಬೇಳೆಯುತ್ತಿಹ
ಎನ್ನಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?
ಸಾಬರಿಮತಿಯ ಸಂದೇಶವು ಮರಯಾಗುತ್ತಿಹ
ದೇಶಭಕ್ತಿಯ ಕಲ್ಪನೆಗಳು ಕಮರುತ್ತಿಹ
ನಾನು-ನನ್ನದು ಸ್ವಾರ್ಥವು ಮೆರೆಯುತ್ತಿಹ
ಎನ್ನಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?
ಮುಂಜಾನೆಯು ಮೌನದಿ ಮುರುಗುತ್ತಿಹ
ಮುಸ್ಸಂಜಯ ಆಟವು ಮೆಳೈಸುತ್ತಿಹ
ಪ್ರೀತಿಯು ಸ್ವಾರ್ಥದ ಕೈಯಲ್ಲಿ ನಲುಗುತ್ತಿಹ
ಎನ್ನೆಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?
ಜಾತಿ-ಧರ್ಮದ ಹೆಸರಿನಲಿ ಅಧಿಕಾರವು ನಡೆಯುತ್ತಿಹ
ಕಲ್ಪನೆಗೆ ನೀಲುಕದೆ ಕಾಂಚಾಣವು ಆಳುತ್ತಿಹ
ನರಹಂತಕರ ಹಿಂಸೆಯು ಮುಗಿಲು ಮುಟ್ಟುತ್ತಿಹ
ಎನ್ನಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?
-ಹಳ್ಳಿ ಹುಡುಗ ತರುಣ್