ಕರಾಗುತ್ತಿರುವ ಕಲ್ಪನೆಗಳಲ್ಲಿ
ಬಾಡುತ್ತಿರುವ ಭಾವನೆಗಳಲ್ಲಿ
ನಂದಿಹೋಗಿರುವ ನಂಬಿಕೆಯಲ್ಲಿ
ನಾನೇನನ್ನು ಬರೆಯಲಿ ಇಂದು...!
ಆಳುತ್ತಿರುವ ಬೆತ್ತಲೆಯ ನಾಯಕರ ನಡುವಲ್ಲಿ
ಕತ್ತಲಾಗುತ್ತಿರುವ ಸಹ್ಯಾದ್ರಿಯ ನಾಡಿನಲ್ಲಿ,
ಜವಾಬ್ದಾರಿಯ ಅರಿಯದ ಪ್ರಜೆಗಳ ನಡುವೆ
ನಾನೇನನ್ನು ಬರೆಯಲಿ ಇಂದು...!
ಕುದಿಯುತ್ತಿರುವ ಮರ್ಮದಲ್ಲಿ
ಹೊಡೆದಾಡುವ ಕಾಮದಲ್ಲಿ
ಅಂಜಿಕೆಯಿಲ್ಲದ ಆನಂದದಲ್ಲಿ
ನಾನೇನನ್ನು ಬರೆಯಲಿ ಇಂದು...!
- ಹಳ್ಳಿ ಹುಡುಗ ತರುಣ್
tharunkumar84@gmail.com