ಸಮಯದ ಅಭಾವ ಮತ್ತು ಸೋಮಾರಿತನಕ್ಕೆ ಜೋತು ಬಿದ್ದು ಕಳೆದ ಕೆಲವು ದಿನಗಳಿಂದ ಬ್ಲಾಗ್ ಕಡೆ ಬಂದಿರಲಿಲ್ಲ ಕ್ಷಮೆ ಇರಲಿ....
ಮಾತು ಬಾರದ ಮೂಕಯಾತನೆ
ಮನವ ಕೊರೆದಿದೆ ಮೌನದಿಂದಲೆ
ಏನು ತಿಳಿಯದೆ ಯಾರಿಗು ಹೇಳದೆ
ಕೊರಗಿ ಕೂತಿದೆ ನಿನ್ನ ನೆನಪಲೆ...!!
ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||
ಮಳೆ-ಬೆಳೆಯಿಲ್ಲದೆ ಊರು ಬಿಟ್ಟ
ಮೇಲೆ ನೆಲೆಸುವ ಶಬ್ದಹೀನತೆಯಂತಹ
ಮನಸಿನ ಮೌನಕ್ಕೆ ಕರಗುತ್ತಿಹುದು
ಕನಸಿನ ಕಲ್ಪನೆಯ ಲಹರಿ
ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||
ಸೂರ್ಯನೆದುರಿಗೆ ಅರಳುವ ಮೊದಲು
ಕತ್ತಲಲ್ಲಿ ಮುದಡಿ ಕೂತಾ ಹೂವಿನಂತೆ
ಹರುಷ ತುಂಬಿದ ಮನಸು ಇಂದು
ಮುದಡಿ ಕೂತಿದೆ ಭಾವ ಕಳೆದು
ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||
ದಿಕ್ಕು-ದಿಕ್ಕುಗಳೆತ್ತಲಿಂದಲೊ ಸುತ್ತುವರಿದ
ಕಪ್ಪು ಮೋಡದಂತೆ ಹೆಪ್ಪುಗಟ್ಟಿದ
ಮನಸಿನಯಾತನೆ ಸುರಿಯಲು ಒಪ್ಪದೆ
ನಿನ್ನ ಬರುವನೆ ಕಾದು ಕೂತಿದೆ
ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||
ಆಕಾಶದತ್ತ ಮುಚ್ಚಿದ ಕಣ್ಣು
ಕತ್ತಲಿನೊಂದಿಗೇ ಕರಗಿಹೋದ
ನಿನ್ನ ನೆನೆಯುತ ಮೆತ್ತ ಮೆತ್ತನೆ
ಸುರಿಸುತಿಹುದು ನೆನಪಿನಹನಿಯ
ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||
ಮಾತು ಬಾರದ ಮೂಕಯಾತನೆ
ಮನವ ಕೊರೆದಿದೆ ಮೌನದಿಂದಲೆ....||
- ಹಳ್ಳಿ ಹುಡುಗ ತರುಣ್
- tharunkumar84@gmail.com
ಇದು ಕೇವಲ ನನ್ನ ಕಲ್ಪನೆ, ಈ ಕವನಕ್ಕೂ ಮತ್ತು ನನ್ನ ಜೀವನಕ್ಕು ಯಾವುದೇ ಸಂಬಂದವಿಲ್ಲ......
ತಪ್ಪಿದ್ದರೆ ದಯವಿಟ್ಟು ತಿಳಿಸಿ...............