Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಶನಿವಾರ, ಅಕ್ಟೋಬರ್ 2, 2010

ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....




ನನ್ನ ಜೋಡಿ ನಿನ್ನ ಜೋಡಿ
ಅಪ್ಪ ನೀನು, ಮಗನು ನಾನು
ಕದ್ದು ತಿನ್ನೋದು ಅಂದ್ರೆ
ನಮ್ಮ ಜೋಡಿ ಮುಂದೆ ಎಲ್ಲ ಹಿಂದೆ
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ಗಾಂಧಿ ತತ್ವದಲ್ಲೇ ಬದುಕುವೆನೆಂದು
ಹೇಳುವಂತ ಅಪ್ಪನ ಮಗನು ನಾನು
ಅಪ್ಪನಿಂದ, ಅಪ್ಪಗಾಗಿ, 
ಜೋಡಿ ಎತ್ತು ನಾವು ಹಾಗಿ, 
ಬಡವರ, ಅಧಿಕಾರ ಕೊಟ್ಟವರ 
ಭೂಮಿ ತಿಂದು ಸಿಕ್ಕಿಬಿದ್ದೀವೆಂದು 
ತಿಳಿದರೆ ಮೂರ್ಖರಯ್ಯ ನೀವಿಂದು...
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಾನು  ರಾಘವೇಂದ್ರ, ಅಲ್ಲ ನಾನು
ವಿಜಯೇಂದ್ರ, ತಿಂದರೇನಂತೆ 
ನಮ್ಮ ಅಪ್ಪ ಹೇಳುತ್ತಾರೆ 
ನಮ್ಮ ತಪ್ಪು ಅವರದಲ್ಲದಂತೆ 
ನಮ್ಮ ಅಭಿವೃದ್ದಿಯೇ ಅವರ ಸಾಧನೆಯಂತೆ
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಾನೇ ಜಗದೀಶ ನಮ್ಮಪ್ಪನೆ ನನಗೀಶ
ಅವರು ಟೋಪಿ ತೊಟ್ಟು ಹಿಂದೆ 
ಬರುವುರೆಲ್ಲರಿಗೂ ಟೋಪಿ 
ಹಾಕಲು ನನ್ನ ಬಿಟ್ಟುರು...
ನೂರು ಕೋಟಿ ಮಾಡಿಬಿಟ್ಟೆ
ಕಟ್ಟಾ ಮುಖದಲಿ ಕೆಟ್ಟ 
ಕೊಳೆಯ ತೆಗೆದು ಬಿಟ್ಟೆ..
ಸಿಕ್ಕಿಬಿದ್ದೀವೆಂದು 
ತಿಳಿದರೆ ಮೂರ್ಖರಯ್ಯ ನೀವಿಂದು..
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ಮರೆಯದಿರಿ ಬಲು ಜೋಡಿಗಳಲ್ಲಿ 
ನಮ್ಮನು, ನಾನೇ ರಾಮಚಂದ್ರ 
ನನ್ನ ಮಗನೆ ಸಪ್ತಾಗಿರಿ 
ನಾವು ಹಾಕಿಕಟ್ಟಿದ ಕಟ್ಟೆಗೆ 
ನಾವೇ ಬಿದ್ದೇವೆಂದು ತಿಳಿದಿದ್ದರೆ
ಮೂರ್ಖರಯ್ಯ ನೀವಿಂದು....
ನಮ್ಮಗೆಲ್ಲ  ಅಭಿವೃದ್ದಿಯ ಮಾಡಲೆಂದು
ಕಣ್ಣೀರು ಇಟ್ಟು ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಮ್ಮ ಜೋಡಿ ಸೇರುವರನ್ನ ಕಾದುನೊಡಿ 
ಅಂದು ತುಪ್ಪವಿಟ್ಟ ಅಪ್ಪನನ್ನೆ 
ಏನು ಮಾಡಲಾಗಲಿಲ್ಲ, ಇನ್ನು
ನಮ್ಮ ಜೋಡಿಯನ್ನು ಯಾರು
ಬೇರೆ ಮಾಡಿಯಾರು.....
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

                           - ಹಳ್ಳಿ ಹುಡುಗ ತರುಣ್
                       tharunkumar84@gmail.com  

17 ಕಾಮೆಂಟ್‌ಗಳು:

shivu.k ಹೇಳಿದರು...

ತರುಣ್,

ಇಂದಿನ ಪರಿಸ್ಥಿತಿಯನ್ನಿ ಕವನ ಮೂಲಕ ಚೆನ್ನಾಗಿ ಹೇಳಿದ್ದೀರಿ...ಗುಡ್ ಮುಂದುವರಿಸಿ..

ಹಳ್ಳಿ ಹುಡುಗ ತರುಣ್ ಹೇಳಿದರು...

thanks shivu sir...

namma duradrusta endina kalave hage agogide..

ಹಳ್ಳಿ ಹುಡುಗ ತರುಣ್ ಹೇಳಿದರು...

thanks vasant

Ittigecement ಹೇಳಿದರು...

ತರುಣ್...

ನನಗೆ ರಾಜಕೀಯ ಅಂದರೆ ಅಷ್ಟಕಷ್ಟೆ..

ಇಲ್ಲಿ ಎಲ್ಲರೂ ಬ್ರಷ್ಟರು...

ಬಹಳ ಚೆನ್ನಾಗಿ ವಿಡಂಬನೆ ಮಾಡಿದ್ದೀರಿ...

ಜೈ ಹೋ...

ಪ್ರಗತಿ ಹೆಗಡೆ ಹೇಳಿದರು...

hahaha... super lines...

ಹಳ್ಳಿ ಹುಡುಗ ತರುಣ್ ಹೇಳಿದರು...

thnaks prakah sir....

yen madodu sir eegina dinadalli rajakiya annodu kettu kulagetti hogide...

ಹಳ್ಳಿ ಹುಡುಗ ತರುಣ್ ಹೇಳಿದರು...

thanks pragathi hegade yavere...

ಅಪ್ಪ-ಅಮ್ಮ(Appa-Amma) ಹೇಳಿದರು...

ತರುಣ್,

ಯಡ್ಡಿ ಮತ್ತು ಸನ್ಸ್ ಬಗ್ಗೆ ಒಂದು ಲೆವಿಲ್ಲಿಗೆ ವಿಡಂಬಿಸಿದ್ದಿರಿ..
ಚೆನ್ನಾಗಿದೆ !

V.R.BHAT ಹೇಳಿದರು...

ಸ್ವಲ್ಪ ಕಾಗುಣಿತ ಇನ್ನೂ ಶುದ್ಧವಾಗಬೇಕು ಅನಿಸಿತು, ಕವನದ ಅಂತರಾರ್ಥ ತಿಳಿಯಿತು, ಚೆನ್ನಾಗಿದೆ, ಅಂತೂ ನೀವೂ ನನ್ನಹಾಗೇ ರಾಜಕೀಯಕ್ಕೆ ಬಂದಿರಿ!ಧನ್ಯವಾದ

ಹಳ್ಳಿ ಹುಡುಗ ತರುಣ್ ಹೇಳಿದರು...

thanks appa-amma (name gottilla) nimma comments ge... :)

ಹಳ್ಳಿ ಹುಡುಗ ತರುಣ್ ಹೇಳಿದರು...

thanks v r bhat sir... kandita tappanu tiddikolake prayatnisuten sir.. nimma salahe sochanege danyavada sir...

howdu sir nim jote navu rajakiyake serakke prayatinsuttiddini.. niv obbare agodre bembaligaru bekalla sir... hage namgu swalpa boomi mado ase sir... :) :)

Manju M Doddamani ಹೇಳಿದರು...

ಮಗ ನನ್ನ ತಲೆ ಗಿರ್ ಅಂತ ಇದೇ ಇದನ್ನ ಓದಿದ ಮೇಲೆ ಹೆಂಗೋ ಬರ್ದೇ

ಜಲನಯನ ಹೇಳಿದರು...

ತರುಣ್...ನಿಮ್ಮಲ್ಲಿ ಬರಲು ತಡವಾಯಿತು...ಸಾರಿ...
ಎಡ್ಡಿಗೆಲ್ಲ ಚಡ್ಡಿಗಿಲ್ಲ ರೆಡ್ಡಿಯೆಲ್ಲ ಲೋಕವೋ
ಮಡ್ಡಿ ಯಾಯ್ತು ದುಡ್ಡುಬಿಡ್ತು ಹೀಗೂ ಒಂದು ಲೋಕವೋ...

ಬಹಳ ಚನ್ನಾಗಿದೆ...

ಹಳ್ಳಿ ಹುಡುಗ ತರುಣ್ ಹೇಳಿದರು...

thanks maga manju nin comments ge.. :)

ಹಳ್ಳಿ ಹುಡುಗ ತರುಣ್ ಹೇಳಿದರು...

thanks azad sir,

nijavagiyu sir kachada galu karnatakada name all madbitru...

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಒಳ್ಳೆಯ ವಿಡಂಬನೆ...

ಹಳ್ಳಿ ಹುಡುಗ ತರುಣ್ ಹೇಳಿದರು...

thanks venkatakrishna .... :)