Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಶನಿವಾರ, ಡಿಸೆಂಬರ್ 11, 2010

ಹೋದೆಯಾ ನಲ್ಲೆ ಹೋದೆಯಾ ನೀ ದೂರಾ....



ಹೋದೆಯಾ ನಲ್ಲೆ ಹೋದೆಯಾ ನೀ ದೂರ
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

ನಿನ್ನ ಕಂಡಾ ದಿನದಿಂದಾ ನನ್ನ ಮನದಲ್ಲಿ
ಬಳ್ಳಿಯಂತೆ ಚಿಗುರಿದ ಅಸೆ ಇದು..
ಮನದಲ್ಲಿ ನಿನ್ನದೇ ನೆನಪಿನ ಮೋಡ
ಬೆಳಸಿ ತುಂತುರು ಮಳೆಯಾದ ಪ್ರೀತಿ ಇದು...


ಹೋದೆಯಾ ನಲ್ಲೆ ಹೋದೆಯಾ ನೀ ದೂರ 
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

ನೋವು-ನಲಿವಿಗೂ ನಿನ್ನ ತೊಳಿನಾಸರೆಯ 
ಬಯಸಿದ ಪ್ರೀತಿ ಇದು..
ಮನಸಿನ ಶೂನ್ಯತೆಗೆ ನಿನ್ನನ್ನೆ 
ನೆನೆದ ಪ್ರೀತಿ ಇದು....
ನಿನ್ನ ಸಂಬಂಧದ ಭಾವತೀವ್ರತೆಗೆ
ತವಕಿಸುತ್ತಿರುವ ಹೃದಯವಿದು..


ಹೋದೆಯಾ ನಲ್ಲೆ ಹೋದೆಯಾ ನೀ ದೂರ 
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

ನನ್ನ ಮನಸಿನ ಅಲೆಯೊಡನೆ
ಅಲೆ-ಅಲೆಯಾಗಿ ಬರುತಿಹ 
ನಿನ್ನ ನೆನಪನ್ನು ನಾ ಹೇಗೆ ಮರೆಯಲಿ..
ಕೈಗೆ ಸಿಗದ ನನ್ನ ಕನಸಿನ ಕಡಲಲ್ಲಿ 
ತೇಲುತಿಹ ನಿನ್ನನು ನಾ ಹೇಗೆ ಬಿಡಲಿ...


ಹೋದೆಯಾ ನಲ್ಲೆ ಹೋದೆಯಾ ನೀ ದೂರ 
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

                             - ಹಳ್ಳಿ ಹುಡುಗ ತರುಣ್
                             tharunkumar84@gmail.com

ಇದು ಕೇವಲ ನನ್ನ ಕಲ್ಪನೆ, ಈ ಕವನಕ್ಕೂ ಮತ್ತು ನನ್ನ ಜೀವನಕ್ಕು ಯಾವುದೇ ಸಂಬಂದವಿಲ್ಲ......
ತಪ್ಪುಗಳನ್ನು ತಿದ್ದಿ-ಸಲಹೆ ಕೊಟ್ಟ ಜಲನಯನ ಅಜಾದ್ ಸರ್ ಗೆ ಧನ್ಯವಾದಗಳು....

13 ಕಾಮೆಂಟ್‌ಗಳು:

ಜಲನಯನ ಹೇಳಿದರು...

ತರುಣ್...
ನಿನ್ನ ಪ್ರಯತ್ನಗಳು ಮನದ ಭಾವ ಬಹಳ ಇಷ್ಟವಾಗುತ್ತದೆ...
ಹೋದೆಯಾ ದೂರ ಓ ಜೊತೆಗಾರ ನೋಡಲು ಬಂದಾಗ...ನೆನಪಾಗುತ್ತೆ ನಿನ್ನ ಈ ಕವನ ನೋಡಿ...

ಹಳ್ಳಿ ಹುಡುಗ ತರುಣ್ ಹೇಳಿದರು...

azad sir nimma comments ge danyavadagalu..

tappanu tiddi helidageg thanks sir.

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಕವನ ಚೆನ್ನಾಗಿದೆ..ಮನ ಮುಟ್ಟುವಂತಿದೆ.

ಹಳ್ಳಿ ಹುಡುಗ ತರುಣ್ ಹೇಳಿದರು...

thanks venkatakrishna sir... matte barta iri

Manju M Doddamani ಹೇಳಿದರು...

ದೂರ ಹೋಗೋ ಥರ ಏನಾದ್ರು ಕಾಟ ಕೊಟ್ಟಿರ್ತಿಯ ಅದಕ್ಕೆ ಬಿಟ್ಟು ಹೋಗಿದಾಳೆ ನಿನ್ನ ನಲ್ಲೆ..!
ಹೋಗ್ಲಿ ಬಿಡು ಸಮಾಧಾನ ಮಾಡ್ಕೋ
ಚನ್ನಾಗಿದೆ ಕವನ

ಅಪ್ಪ-ಅಮ್ಮ(Appa-Amma) ಹೇಳಿದರು...

ತರುಣ್,

ಬಹಳ ಸಮಯದ ನಂತರ ನಿಮ್ಮ ಪೋಸ್ಟ್.
ಅಗಲಿಕೆಯ ನೋವು ಕವನದಲ್ಲಿ ಮೂಡಿಬಂದಿದೆ.

ಹಳ್ಳಿ ಹುಡುಗ ತರುಣ್ ಹೇಳಿದರು...

manju,

howdu maga kata jasti agi hodi hodalu... :)

danyavaadagalu.. :)

ಹಳ್ಳಿ ಹುಡುಗ ತರುಣ್ ಹೇಳಿದರು...

appa-amma,

howdu ri swalpa kelasda ottadadall enannu bareyoke aglilla..

danyavadagalu...

Ittigecement ಹೇಳಿದರು...

ತರುಣ್ ಜೀ..

ಅರ್ಥಮಾಡಿಕೊಳ್ಳದೆ.. ದೂರವಾದಾಗ ಮನಸ್ಸು ಪರಿತಪಿಸುವದು ಹೀಗೆಯೇ...

ಭಾವಗಳು ತುಂಬಾ ಚೆನ್ನಾಗಿ ವ್ಯಕ್ತವಾಗಿದೆ...

ನಾನು ಬರಲಿಕ್ಕೆ ತಡವಾಯಿತು... ಬೇಸರಿಸದಿರಿ...

ಪ್ರಾಸ ಬದ್ಧವಾದ.. ಭಾವಪೂರ್ಣ ಕವನಕ್ಕೆ ಅಭಿನಂದನೆಗಳು...

ಪ್ರೀತಿಯಿಂದ..
ಪ್ರಕಾಶಣ್ಣ,..

ಚುಕ್ಕಿಚಿತ್ತಾರ ಹೇಳಿದರು...

chandada kavite..

ಹಳ್ಳಿ ಹುಡುಗ ತರುಣ್ ಹೇಳಿದರು...

prakashanna thanks anna.

ಹಳ್ಳಿ ಹುಡುಗ ತರುಣ್ ಹೇಳಿದರು...

thanks chukki chitaravarare

kona ಹೇಳಿದರು...

Click For More Details Everyday-Variety.