Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಭಾನುವಾರ, ಅಕ್ಟೋಬರ್ 31, 2010

ನಾನೇನನ್ನು ಬರೆಯಲಿ ಇಂದು..!



ಕರಾಗುತ್ತಿರುವ ಕಲ್ಪನೆಗಳಲ್ಲಿ

ಬಾಡುತ್ತಿರುವ ಭಾವನೆಗಳಲ್ಲಿ

ನಂದಿಹೋಗಿರುವ ನಂಬಿಕೆಯಲ್ಲಿ

ನಾನೇನನ್ನು  ಬರೆಯಲಿ ಇಂದು...!


ಆಳುತ್ತಿರುವ ಬೆತ್ತಲೆಯ ನಾಯಕರ ನಡುವಲ್ಲಿ

ಕತ್ತಲಾಗುತ್ತಿರುವ ಸಹ್ಯಾದ್ರಿಯ ನಾಡಿನಲ್ಲಿ, 

ಜವಾಬ್ದಾರಿಯ ಅರಿಯದ ಪ್ರಜೆಗಳ ನಡುವೆ

ನಾನೇನನ್ನು ಬರೆಯಲಿ ಇಂದು...!


ಕುದಿಯುತ್ತಿರುವ ಮರ್ಮದಲ್ಲಿ

ಹೊಡೆದಾಡುವ ಕಾಮದಲ್ಲಿ

ಅಂಜಿಕೆಯಿಲ್ಲದ ಆನಂದದಲ್ಲಿ

ನಾನೇನನ್ನು ಬರೆಯಲಿ ಇಂದು...!

               - ಹಳ್ಳಿ ಹುಡುಗ ತರುಣ್
            tharunkumar84@gmail.com  



ಭಾನುವಾರ, ಅಕ್ಟೋಬರ್ 24, 2010

ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ ..............



ನಾನು ಇಷ್ಟ ಪಡುವ
ನನ್ನ ಪ್ರೀತಿಗೆ ಅರ್ಥಕೊಡುವ 
ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ
ನನಗೆ ಇನ್ನು ಸಿಕ್ಕಿಲ್ಲ...!!

ಬರುವ ಸಂಬಳ ನನ್ನ ಜೊಬು
ತುಂಬಲ್ಲ, ನನ್ನ ಬಳಿಯು ಸಾಲದ 
ಕರೆಯೋಲೆಯ ಪತ್ರವಿಲ್ಲ
ಅದು ಅವಳಿಗೆ ಹಿಡಿಸೋಲ್ಲ ....೧

ಮಾಲು-ಗಿಲು ಸುತ್ತೋ ಚಟವು
ನನಗಿಲ್ಲ, ಕಾರು-ಬೈಕು 
ನನ್ನ ಬಳಿ ಮೊದಲೇ ಇಲ್ಲ
ಅದು ಅವಳಿಗೆ ಹಿಡಿಸೋಲ್ಲ ....೨

ಹಿಂದಿ-ಇಂಗ್ಲೀಶ್ ಮತಾಡೋಕ್ಕೆ 
ನನಗೆ ಬರಲ್ಲ, ಪೀಜಾ-ಬರ್ಗರ್ 
ನಾನು ತಿನ್ನಲ್ಲ
ಅದು ಅವಳಿಗೆ ಹಿಡಿಸೋಲ್ಲ....೩

ನಾ ಹಾಕೋ ಬಟ್ಟೆಗೆ ಬಣ್ಣ ಬಳೆದಿಲ್ಲ, 
ಅಂದವ ತಿಳಿಯದ ಕೃತಕ 
ಬದುಕಿನ ಪೇಟೆಯ ಹುಡುಗ ನಾನಲ್ಲ
ಅದು ಅವಳಿಗೆ ಹಿಡಿಸೋಲ್ಲ....೪

ನಾ ಇಷ್ಟ ಪಡುವ
ನನ್ನ ಪ್ರೀತಿಗೆ ಅರ್ಥಕೊಡುವ 
ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ
ನನಗೆ ಇನ್ನು ಸಿಕ್ಕಿಲ್ಲ...!!

                                          - ಹಳ್ಳಿ ಹುಡುಗ ತರುಣ್
                                                          tharunkumar84@gmail.com  


ಶನಿವಾರ, ಅಕ್ಟೋಬರ್ 23, 2010

ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........




   ನಿನ್ನ ಕಣ್ಣಲ್ಲಿ ಕವಿದಿಹ ಪೊರೆಯ
ನಡುವಲ್ಲಿ ಮೂಡಿಹ ಅಹಂ,
   ದ್ವೇಷದ ಭಾವಾದಿ, ಕನಸಿನ ಮೊಹದಿ
    ವಿಷವ ಕಾರುತಿಹ ನಿನ್ನ ಮನಸಿನ ಆಸೆ
               ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........!

ತಾ ಬೆಳೆದರೆ ಎಲ್ಲ,
 ತಾನುಳಿದರೆ ಚೆನ್ನ, ತನಗೆತನೆಲ್ಲಾ 
ತಾನಗಿನ್ಯಾರು ಎನ್ನುತಿಹ       
ನಿನ್ನ ಮನಸಿನ ದುರಹಂಕಾರ
           ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ........!

ಪರರಿಗಪಕಾರವ ಬಯಸಿ
ತನ್ನುಪಕರಕ್ಕೆಂದು ಸ್ವಾರ್ಥದ 
ಅಲೆಗಳಲ್ಲಿ ತೇಲಿ ಆನಂದಿಸುತ 
ನೀ ನುಡಿಯುತ್ತಿರುವ ಸತ್ಯ
              ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........!

ಮದವೇರಿದ ಹುಮ್ಮಸಿನಲ್ಲಿ
ಅಧಿಕಾರದ ಗದ್ದುಗೆಯಲಿ
ಕಷ್ಠವೆಂದು ಬಂದವರ ಲೆಕ್ಕಿಸದೆ
ತನ್ನವರಿಗೆಂದು ಕೂಡಿಟ್ಟ ಹಣ
             ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ.........!


                                                                    - ಹಳ್ಳಿ ಹುಡುಗ ತರುಣ್
                                                          tharunkumar84@gmail.com  

    

ಶನಿವಾರ, ಅಕ್ಟೋಬರ್ 2, 2010

ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....




ನನ್ನ ಜೋಡಿ ನಿನ್ನ ಜೋಡಿ
ಅಪ್ಪ ನೀನು, ಮಗನು ನಾನು
ಕದ್ದು ತಿನ್ನೋದು ಅಂದ್ರೆ
ನಮ್ಮ ಜೋಡಿ ಮುಂದೆ ಎಲ್ಲ ಹಿಂದೆ
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ಗಾಂಧಿ ತತ್ವದಲ್ಲೇ ಬದುಕುವೆನೆಂದು
ಹೇಳುವಂತ ಅಪ್ಪನ ಮಗನು ನಾನು
ಅಪ್ಪನಿಂದ, ಅಪ್ಪಗಾಗಿ, 
ಜೋಡಿ ಎತ್ತು ನಾವು ಹಾಗಿ, 
ಬಡವರ, ಅಧಿಕಾರ ಕೊಟ್ಟವರ 
ಭೂಮಿ ತಿಂದು ಸಿಕ್ಕಿಬಿದ್ದೀವೆಂದು 
ತಿಳಿದರೆ ಮೂರ್ಖರಯ್ಯ ನೀವಿಂದು...
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಾನು  ರಾಘವೇಂದ್ರ, ಅಲ್ಲ ನಾನು
ವಿಜಯೇಂದ್ರ, ತಿಂದರೇನಂತೆ 
ನಮ್ಮ ಅಪ್ಪ ಹೇಳುತ್ತಾರೆ 
ನಮ್ಮ ತಪ್ಪು ಅವರದಲ್ಲದಂತೆ 
ನಮ್ಮ ಅಭಿವೃದ್ದಿಯೇ ಅವರ ಸಾಧನೆಯಂತೆ
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಾನೇ ಜಗದೀಶ ನಮ್ಮಪ್ಪನೆ ನನಗೀಶ
ಅವರು ಟೋಪಿ ತೊಟ್ಟು ಹಿಂದೆ 
ಬರುವುರೆಲ್ಲರಿಗೂ ಟೋಪಿ 
ಹಾಕಲು ನನ್ನ ಬಿಟ್ಟುರು...
ನೂರು ಕೋಟಿ ಮಾಡಿಬಿಟ್ಟೆ
ಕಟ್ಟಾ ಮುಖದಲಿ ಕೆಟ್ಟ 
ಕೊಳೆಯ ತೆಗೆದು ಬಿಟ್ಟೆ..
ಸಿಕ್ಕಿಬಿದ್ದೀವೆಂದು 
ತಿಳಿದರೆ ಮೂರ್ಖರಯ್ಯ ನೀವಿಂದು..
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ಮರೆಯದಿರಿ ಬಲು ಜೋಡಿಗಳಲ್ಲಿ 
ನಮ್ಮನು, ನಾನೇ ರಾಮಚಂದ್ರ 
ನನ್ನ ಮಗನೆ ಸಪ್ತಾಗಿರಿ 
ನಾವು ಹಾಕಿಕಟ್ಟಿದ ಕಟ್ಟೆಗೆ 
ನಾವೇ ಬಿದ್ದೇವೆಂದು ತಿಳಿದಿದ್ದರೆ
ಮೂರ್ಖರಯ್ಯ ನೀವಿಂದು....
ನಮ್ಮಗೆಲ್ಲ  ಅಭಿವೃದ್ದಿಯ ಮಾಡಲೆಂದು
ಕಣ್ಣೀರು ಇಟ್ಟು ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಮ್ಮ ಜೋಡಿ ಸೇರುವರನ್ನ ಕಾದುನೊಡಿ 
ಅಂದು ತುಪ್ಪವಿಟ್ಟ ಅಪ್ಪನನ್ನೆ 
ಏನು ಮಾಡಲಾಗಲಿಲ್ಲ, ಇನ್ನು
ನಮ್ಮ ಜೋಡಿಯನ್ನು ಯಾರು
ಬೇರೆ ಮಾಡಿಯಾರು.....
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

                           - ಹಳ್ಳಿ ಹುಡುಗ ತರುಣ್
                       tharunkumar84@gmail.com  

ಮನಸು...


ಎದುರು ಅಲೆ ಎಬ್ಬಿಸುವ 
ಕಡಲ ದಡದಲ್ಲಿ
ಮುಳುಗುತ್ತಿಹ ರವಿಯ 
ಕೆಂಪನೆಯ ಮುಖದಲ್ಲಿ
ಕರಗುತಿಹುದೆನ್ನ ಮನಸು....! 

ತಂಪಾದ ಗಾಳಿಯಲ್ಲಿ
ಹಸಿರ ಉಟ್ಟಿ, ತಳಿರು 
ತೋರಣದಿ ತೂಗುತ್ತಿಹ
ಮರ-ಗಿಡಗಳ ಬಳ್ಳಿಯಲ್ಲಿ
ನಲಿಯುತಿಹುದೆನ್ನ ಮನಸು..!

ಗದ್ದೆಯ ಬದಿಯ ತಳದಲ್ಲಿ
ಹರಿಯುತ್ತಿಹ ನೀರಿನ
ಝುಳು ಝುಳು ನಾದಕ್ಕೆ
ತಲೆಯನ್ನಾಡಿಸುತಿಹ ಪೈರಿನಲಿ
ತೂಗಾಡುತಿಹುದೆನ್ನ ಮನಸು...!

ರೆಕ್ಕೆಯ ಬಡಿತದ ರಬಸದಲ್ಲಿ
ಒಂದಾಗಿ ತನ್ನ ಬಳಗದಲ್ಲಿ
ನೀಲಾಕಾಸದಲ್ಲಿ ತೇಲುತಿಹ
ಚಿಲಿ-ಪಿಲಿ ಹಕ್ಕಿಯ ಜೊತೆಯಲ್ಲಿ
ತೇಲಿ ಹೊಗುತಿಹುದೆನ್ನ ಮನಸು...!

ದಟ್ಟಾರಣ್ಯಾದ ನಡುವಿನಲ್ಲಿ
ನಡೆಯುತಿಹ ಕಾಡು ಮೃಗದ
ಒಡಲಲ್ಲಿ ಮೂಡುತ್ತಿಹ 
ಬೇಟೆಯ ಹಂಬಲದಲ್ಲಿ 
ಸಿಲುಕಿ ನಲಿಯುತಿಹುದೆನ್ನ ಮನಸು...!

ಬೆಳದಿಂಗಳ ರಾತ್ರಿಯಲಿ
ಬೆಳಗುತಿಹ ಚಂದಿರನ ಮರೆಯಲ್ಲಿ
ಇಣುಕುತಿಹ ನಕ್ಷತ್ರಗಳ ಸಾಲಿನಲ್ಲಿ
ಬರೆದಿಹ ರಂಗೊಲಿಯ ಮಧ್ಯದಲ್ಲಿ
ಮೆರೆಯುತ್ತಿಹುದೆನ್ನ ಮನಸು...!

ಘಮ ಘಮಿಸುತ್ತಿಹ ಹೂದೊಟದಲ್ಲಿ
ಮಧುವನ್ನು ಹಿರುತ್ತಿಹ
ದುಂಬಿಯ ನಾದದಲ್ಲಿ
ಕರಗುತಿಹ ಮೌನದಲ್ಲಿ
ಮುಳುಗುತಿಹುದೆನ್ನ ಮನಸು....!
                        
- ಹಳ್ಳಿ ಹುಡುಗ ತರುಣ್
   tharunkumar84@gmail.com  

ಕೆಲಸದ ಒತ್ತಡದಿಂದ ಬಹಳ ದಿನದಿಂದ ಎನನ್ನು ಬರೆಯಲಾಗಲಿಲ್ಲ so, ಅದಕ್ಕೆ ಇಂದು, ರಾತ್ರಿಯಲ್ಲಿ ಹಾಗೆ ನನ್ನ ಮನಸನ್ನು ತೇಲಿ ಬಿಟ್ಟೆ, ಅದರ ಪ್ರಯಾಣವೆ ಈ ಮನಸು..................... ಅದಿ ತಪ್ಪಿದ್ದರೆ ಕ್ಷೇಮಿಸಿ ಮತ್ತು ತಿಳಿಸಿ :)

ತಪ್ಪಿದ್ದರೆ ದಯವಿಟ್ಟು ತಿಳಿಸಿ....