Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಭಾನುವಾರ, ನವೆಂಬರ್ 6, 2011

ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ.........

ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ


ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಹಲವು ಬಣ್ಣದ ದೇಹದ ತುಂಬ 
ಬಣ್ಣ ಬಣ್ಣದ ಬಟ್ಟನು ತೊಟ್ಟ ಚಿಟ್ಟೆ....||

ಹೂವಿಂದ ಹೂವಿಗೆ ಪಯಣಿಸುವ ಚಿಟ್ಟೆ
ನೋಡುವ ಕಣ್ಣಿಗೆ ನೀ ಕನಸಾಗಿ ಬಿಟ್ಟೆ....

ನಲಿ ನಲಿದಾಡುತ ಸವಿಯನು ಸವಿಯುವ ಚಿಟ್ಟೆ
ಬರೆಯುವ ಕೈಗಳಿಗೆ ನೀ ಕವಿತೆಯಾಗಿ ಬಿಟ್ಟೆ...

ತಳಿರು-ತೋರಣದಲ್ಲಿ ಹೊಮ್ಮಿಸುವ ಓಂಕಾರದ ಚಿಟ್ಟೆ
ಕೇಳುವ ಕಿವಿಗಳಿಗೆ ಸಂಗೀತದ ಅಲೆಯಾಗಿ ಬಿಟ್ಟೆ...

ಕ್ಷಣ-ಕ್ಷಣವು ಕಣ್ಮುಂದೆ ಮಾಯವಾಗುವ ಚಿಟ್ಟೆ
ಹುಡುಕುವ ಮನಸಿಗೆ ನೀ ಆಟವಾಗಿ ಬಿಟ್ಟೆ...

ನಿನ್ನನು ಹಿಡಿಯಲು ನಾ ಆಸೆ ಪಟ್ಟೇ
ನೀನು ನನ್ನ ಮನಸ್ಸನ್ನೇ ಕದ್ದು ಬಿಟ್ಟೆ
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ.......||
                                      
                                            - ಹಳ್ಳಿ ಹುಡುಗ ತರುಣ್         
                                                            - tharunkumar84@gmail.com

ತಪ್ಪಿದ್ದರೆ ದಯವಿಟ್ಟು ತಿಳಿಸಿ...............

ಭಾನುವಾರ, ಅಕ್ಟೋಬರ್ 16, 2011

ಒಮ್ಮೆ ಬಂದು ಕೂಗಿ ಕರೆಯೆ..



ಸಮಯದ ಅಭಾವ ಮತ್ತು ಸೋಮಾರಿತನಕ್ಕೆ ಜೋತು ಬಿದ್ದು ಕಳೆದ ಕೆಲವು ದಿನಗಳಿಂದ  ಬ್ಲಾಗ್ ಕಡೆ ಬಂದಿರಲಿಲ್ಲ ಕ್ಷಮೆ ಇರಲಿ....
ಮಾತು ಬಾರದ ಮೂಕಯಾತನೆ 
ಮನವ ಕೊರೆದಿದೆ ಮೌನದಿಂದಲೆ
ಏನು ತಿಳಿಯದೆ ಯಾರಿಗು ಹೇಳದೆ
ಕೊರಗಿ ಕೂತಿದೆ ನಿನ್ನ ನೆನಪಲೆ...!!

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಮಳೆ-ಬೆಳೆಯಿಲ್ಲದೆ ಊರು ಬಿಟ್ಟ
ಮೇಲೆ ನೆಲೆಸುವ ಶಬ್ದಹೀನತೆಯಂತಹ
ಮನಸಿನ ಮೌನಕ್ಕೆ ಕರಗುತ್ತಿಹುದು 
ಕನಸಿನ ಕಲ್ಪನೆಯ ಲಹರಿ 

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಸೂರ್ಯನೆದುರಿಗೆ ಅರಳುವ ಮೊದಲು
ಕತ್ತಲಲ್ಲಿ ಮುದಡಿ ಕೂತಾ ಹೂವಿನಂತೆ
ಹರುಷ ತುಂಬಿದ ಮನಸು ಇಂದು
ಮುದಡಿ ಕೂತಿದೆ ಭಾವ ಕಳೆದು

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ದಿಕ್ಕು-ದಿಕ್ಕುಗಳೆತ್ತಲಿಂದಲೊ ಸುತ್ತುವರಿದ
ಕಪ್ಪು ಮೋಡದಂತೆ ಹೆಪ್ಪುಗಟ್ಟಿದ
ಮನಸಿನಯಾತನೆ ಸುರಿಯಲು ಒಪ್ಪದೆ
ನಿನ್ನ ಬರುವನೆ ಕಾದು ಕೂತಿದೆ 

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಆಕಾಶದತ್ತ ಮುಚ್ಚಿದ ಕಣ್ಣು 
ಕತ್ತಲಿನೊಂದಿಗೇ ಕರಗಿಹೋದ
ನಿನ್ನ ನೆನೆಯುತ ಮೆತ್ತ ಮೆತ್ತನೆ 
ಸುರಿಸುತಿಹುದು ನೆನಪಿನಹನಿಯ 

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಮಾತು ಬಾರದ ಮೂಕಯಾತನೆ  
ಮನವ ಕೊರೆದಿದೆ ಮೌನದಿಂದಲೆ....||

                                                            - ಹಳ್ಳಿ ಹುಡುಗ ತರುಣ್         
                                                            - tharunkumar84@gmail.com

ಇದು ಕೇವಲ ನನ್ನ ಕಲ್ಪನೆ, ಈ ಕವನಕ್ಕೂ ಮತ್ತು ನನ್ನ ಜೀವನಕ್ಕು ಯಾವುದೇ ಸಂಬಂದವಿಲ್ಲ......
ತಪ್ಪಿದ್ದರೆ ದಯವಿಟ್ಟು ತಿಳಿಸಿ...............


ಶುಕ್ರವಾರ, ಜನವರಿ 14, 2011

ನೀನ್ಯಾರೆ.. ?



ಮಿಂಚಿನಂತೆ ಅಂಚಿನಲ್ಲೇ ಬಂದು 

ಮೂರು ಲೋಕ ತಣಿಸುವಂ ನೋಟ ಬೀರಿ   

ಕೊಂಚವೂ ನಾಚದೇ  ಹೃದಯ ಹೊಕ್ಕು

ನಿನ್ನ ರೂಪವನ್ನು ಕಣ್ಣ ತುಂಬ ಕಟ್ಟಿ ಹೋದ   

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?


ಕಣ್ಣ ಮುಂದೆ ನಲಿಯುತಿರುವ  

ನವಿಲು ಗರಿಯ ರೂಪದಂಥ 

ಕಪ್ಪು ಕೂದಲನ್ನು ಮೆಲ್ಲ ಸರಿಸುವಂತೆ 

ಓರೆಗಣ್ಣಿನಲ್ಲೇ ಮನಕ್ಕೆ ಮುತ್ತು ಕೊಟ್ಟು ಹೋದ    

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?


ಭಾವ ಹೃದಯ ತಟ್ಟಿ, ಒಲುಮೆ-ಚಿಲುಮೆ ಹುಟ್ಟಿ 

ಹುಟ್ಟೊ ಗುಟ್ಟು ತಿಳಿಸಿ, ಮನಸಿನಲ್ಲೇ ಕವನ ಬರೆಸಿ

ರೆಪ್ಪೆ ತುಂಬಾ ಕಾಡುವಂಥ ಕನಸ ಬೆಳೆಸಿ

ಕೇಳದೆ ಮಾಯ ಜಿಂಕೆಯಂತೆ ಹಾರಿಹೋದ

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?


ಕೆಂದಾವರೆಯಂಥ ಮುದ್ದು ಕೆನ್ನೆ ಹೊತ್ತು

ಹಿಗ್ಗಿದ ಹೂವಂಥ ನೀಳ ನಾಸಿಕ ತೊಟ್ಟು

ಸೂರ್ಯ ಕಿರಣದಂಥ ಕಣ್ಣ ನೋಟದಲ್ಲೇ

ಮನಸ ನಾಟುವಂಥ ಈಟಿ ಬಿಟ್ಟು ಹೋದ

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?

                                                 - ಹಳ್ಳಿ ಹುಡುಗ ತರುಣ್         
                                                 - tharunkumar84@gmail.com

ನಮ್ಮ ಸಹ ಜೀತಗಾರರಾದ ದೀಪಕ್ ತಾವು bike ನಲ್ಲಿ office ಗೆ ಬರುವಾಗ ನೋಡಿದ ಒಂದು ಸುಂದರ ಹೆಣ್ಣಿನ ಬಗ್ಗೆ ಹೇಳಿ, ಬರೆಯುವಂತೆ ಪ್ರೆರೇಪಿಸಿದಾಗ ಮೂಡಿ ಬಂದ ಒಂದೆರಡು ಸಾಲುಗಳು ನಿಮ್ಮ ಮುಂದೆ..... ತಪ್ಪಿದ್ದರೆ ದಯವಿಟ್ಟು ತಿಳಿಸಿ.

ತಪ್ಪುಗಳನ್ನು ತಿದ್ದಿ-ಸಲಹೆ ಕೊಟ್ಟ ಜಲನಯನ ಅಜಾದ್ ಸರ್ ಗೆ ಧನ್ಯವಾದಗಳು....

ಶುಕ್ರವಾರ, ಡಿಸೆಂಬರ್ 31, 2010

ಒಂಟಿ ಪಯಣಿಗ ನಾನಿಲ್ಲಿ.... ! " ಹೊಸ ವರುಷದ ಹಾರ್ದಿಕ ಶುಭಾಶಯಗಳು "



ಬೆತ್ತಲೆ ಮನಸಿನ ಕನಸಿನಲಿ

ಕತ್ತಲೆ-ಬೆಳಕಿನ ಆಟದಲಿ

ಸ್ವಾರ್ಥವು ತುಂಬಿದ ಬದುಕಿನಲಿ

ಕುಂಟುತ್ತಾ ಸಾಗುವ ಹಾದಿಯಲಿ

ಒಂಟಿ ಪಯಣಿಗ ನಾನಿಲ್ಲಿ.... !



ಕೋಪ-ತಾಪದ ಮಳೆಯಲಿ 

ಜಾತಿ-ಧರ್ಮದ ಗಿಡ-ಮರಗಳ ನೆರಳಿನಲಿ

ಕಷ್ಟ-ಸುಖದ ಚಿಲಿ-ಪಿಲಿ ಇಂಚರದಲಿ 

ಕುಂಟುತ್ತಾ ಸಾಗುವ ಹಾದಿಯಲಿ

ಒಂಟಿ ಪಯಣಿಗ ನಾನಿಲ್ಲಿ.... !



ಅಸೊಯೆಯು ತುಂಬಿದ ಕಲ್ಲು-ಮಣ್ಣಿನ ದಾರಿಯಲಿ

ಮೋಹದ ಪೊರೆಯಲಿ ಮುಚ್ಚಿದ ನೋಟದಲಿ

ದ್ವೇಷದಿ ಉರಿಯುತ್ತಿರುವ ಬಂಡೆಗಳ ನಡುವಲ್ಲಿ

ಕುಂಟುತ್ತಾ ಸಾಗುವ ಹಾದಿಯಲಿ

ಒಂಟಿ ಪಯಣಿಗ ನಾನಿಲ್ಲಿ.... !



ಅರ್ಥವ ತಿಳಿಯದ ಆಸೆಯು ತುಂಬಿದ ಹೆಜ್ಜೆಗಳಲ್ಲಿ

ದಗೆ ಏರಿದ ಬಯಕೆಗಳ ಬಾಯಾರಿಕೆಯಲ್ಲಿ

ಅಂತ್ಯವ ಕಾಣದೆ ಉರುಳುತ್ತಿರುವ ಗಡಿಗಳಲ್ಲಿ

ಕುಂಟುತ್ತಾ ಸಾಗುವ ಹಾದಿಯಲಿ

ಒಂಟಿ ಪಯಣಿಗ ನಾನಿಲ್ಲಿ.... !



ವರುಷ ವರುಷಕ್ಕೂ ಬರುವ ಈ ಹೊಸ ವರುಷ ನಿಮ್ಮೆಲ್ಲರ ಬಾಳಿನಲ್ಲಿ ಸದಾ ಹರುಷದ ಹೊನಲನ್ನು ಹೊತ್ತಿ ತರಲಿ, ಶಾಂತಿ, ಸಹನೆ, ಸಹಬಾಳ್ವೆಯು ಎಲ್ಲರ ನೆಲೆಯಾಗಲಿ... ಹೊಸ ವರುಷದ ಹಾರ್ದಿಕ ಶುಭಾಶಯಗಳು ...
                                   


                                - ಹಳ್ಳಿ ಹುಡುಗ ತರುಣ್         
                                                 - tharunkumar84@gmail.com

ಶನಿವಾರ, ಡಿಸೆಂಬರ್ 11, 2010

ಹೋದೆಯಾ ನಲ್ಲೆ ಹೋದೆಯಾ ನೀ ದೂರಾ....



ಹೋದೆಯಾ ನಲ್ಲೆ ಹೋದೆಯಾ ನೀ ದೂರ
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

ನಿನ್ನ ಕಂಡಾ ದಿನದಿಂದಾ ನನ್ನ ಮನದಲ್ಲಿ
ಬಳ್ಳಿಯಂತೆ ಚಿಗುರಿದ ಅಸೆ ಇದು..
ಮನದಲ್ಲಿ ನಿನ್ನದೇ ನೆನಪಿನ ಮೋಡ
ಬೆಳಸಿ ತುಂತುರು ಮಳೆಯಾದ ಪ್ರೀತಿ ಇದು...


ಹೋದೆಯಾ ನಲ್ಲೆ ಹೋದೆಯಾ ನೀ ದೂರ 
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

ನೋವು-ನಲಿವಿಗೂ ನಿನ್ನ ತೊಳಿನಾಸರೆಯ 
ಬಯಸಿದ ಪ್ರೀತಿ ಇದು..
ಮನಸಿನ ಶೂನ್ಯತೆಗೆ ನಿನ್ನನ್ನೆ 
ನೆನೆದ ಪ್ರೀತಿ ಇದು....
ನಿನ್ನ ಸಂಬಂಧದ ಭಾವತೀವ್ರತೆಗೆ
ತವಕಿಸುತ್ತಿರುವ ಹೃದಯವಿದು..


ಹೋದೆಯಾ ನಲ್ಲೆ ಹೋದೆಯಾ ನೀ ದೂರ 
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

ನನ್ನ ಮನಸಿನ ಅಲೆಯೊಡನೆ
ಅಲೆ-ಅಲೆಯಾಗಿ ಬರುತಿಹ 
ನಿನ್ನ ನೆನಪನ್ನು ನಾ ಹೇಗೆ ಮರೆಯಲಿ..
ಕೈಗೆ ಸಿಗದ ನನ್ನ ಕನಸಿನ ಕಡಲಲ್ಲಿ 
ತೇಲುತಿಹ ನಿನ್ನನು ನಾ ಹೇಗೆ ಬಿಡಲಿ...


ಹೋದೆಯಾ ನಲ್ಲೆ ಹೋದೆಯಾ ನೀ ದೂರ 
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

                             - ಹಳ್ಳಿ ಹುಡುಗ ತರುಣ್
                             tharunkumar84@gmail.com

ಇದು ಕೇವಲ ನನ್ನ ಕಲ್ಪನೆ, ಈ ಕವನಕ್ಕೂ ಮತ್ತು ನನ್ನ ಜೀವನಕ್ಕು ಯಾವುದೇ ಸಂಬಂದವಿಲ್ಲ......
ತಪ್ಪುಗಳನ್ನು ತಿದ್ದಿ-ಸಲಹೆ ಕೊಟ್ಟ ಜಲನಯನ ಅಜಾದ್ ಸರ್ ಗೆ ಧನ್ಯವಾದಗಳು....

ಗುರುವಾರ, ನವೆಂಬರ್ 4, 2010

ದೀಪಾವಳಿಯ ಶುಭಾಶಯಗಳು



ಬೆಳಕೇ ನಿನ್ನೊಲುಮೆಯಿಂದ ಹೃದಯದೊಳು ಒಲುಮೆಯ ಗೀತೆ ತೇಲಿ ಬರುತ್ತಿರಲಿ, ಎದೆಯಿಂದ ಎದೆಗೆ.. ನಿನ್ನ ಪ್ರೀತಿಯ ಗಾಳಿ ಸೋಕಿ ದ್ವೇಷ ಸ್ವಾರ್ಥವ ಹೊರಗೆ ನೂಕಿ....
ದೀಪಾವಳಿಯ ಶುಭಾಶಯಗಳು.
                                                           

ಸೋಮವಾರ, ನವೆಂಬರ್ 1, 2010

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...!.



"ತಾಯಿ ಕನ್ನಡತಿ ನಿನ್ನೊಳಿರುವ ಶಾಂತಿ ಸಹನೆ ಪ್ರೀತಿ ಕೊಡು ಎಲ್ಲರಿಗು ಎಲ್ಲರ ನುಡಿಯಾಗಲಿ ಕನ್ನಡ ಎಲ್ಲರ ನಡೆಯಾಗಲಿ ಕನ್ನಡ"


ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...! 



ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಉತ್ತರದಲ್ಲಿ ಭೊರ್ಗರೆದು ಹರಿಯುತಿಹನು


ಕೃಷ್ಣನು, ಭೀಮ ಮಲಪ್ರಭ


ಘಟಪ್ರಭ ತುಂಗಭದ್ರೆಯ ಮಡುವಲ್ಲಿ, 


ಹೇಮಾವತಿ ಕಬಿನಿ ಕನ್ನಂಬಾಡಿ


ಒಡಲನ್ನು ತುಂಬಿ ತಣಿಸುತಿಹಳು


ದಕ್ಷಿಣದಲ್ಲಿ ಕನ್ನಡತಿಯ ಮಗಳು ಕಾವೇರಿ..!




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ನಂದ, ಮಯೂರ, ಕದಂಬ,


ಚಾಲುಕ್ಯ, ಹೊಯ್ಸಳ, ಮೈಸೂರು 


ವಿಜಯನಗರದರಾಸರಾಳಿದ ಕಲೆಯ ಬೀಡು, 


ರನ್ನ ಪೊನ್ನ ಪಂಪರ ಸಾಹಿತ್ಯದ 


ನಾಡಿದು, ಕುವೆಂಪು ಬೇಂದ್ರೆ ಕಾರಂತ


ಮಾಸ್ತಿಯರು ಆರಳಿಸಿದ ಕರುನಾಡಿದು..




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಮಲೆನಾಡ, ಕರಾವಳಿ, 


ಬಯಲು ಸೀಮೆಯ ನಡುವಲ್ಲಿ 


ಬೆಳಗುತಿಹ ಸಹ್ಯಾದ್ರಿಯ ಒಡಲು  


ಕೋಟಿ ಜೀವಿಗಳ ಮಡಿಲು ಕರುನಾಡು..




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಡೊಳ್ಳು ಕುಣಿತ ಕಂಸಾಳೆ


ವೀರಗಾಸೆ  ಕೋಲಾಟ


ಸೋಮನ ಕುಣಿತ ಯಕ್ಷಗಾನ


ಹಗಲು ವೇಷದಂತ ಜಾನಪದ ಕಲೆಗಳ 


ಸಂಸ್ಕೃತಿಯ ತವರುನಾಡು ಕನ್ನಡ ನಾಡು...!




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಗುಬ್ಬಿ ವೀರಣ್ಣ, ಕೈಲಾಸಂ 


ಕಾರಂತ,ಸುಬ್ಬಣ್ಣರ೦ತವರು


ಬೆಳೆಸಿದ ರಂಗಭೂಮಿಯ ನಾಡು


ಗಂಗೂಬಾಯಿ, ಭೀಮಸೇನ್ ಜೋಷಿ,


ಪುಟ್ಟರಾಜ್ ಗವಾಯಿರವರಂತ 


ಸಂಗೀತ ಮಾಂತ್ರೀಕರಿಂದ 


ತಣಿಸಿದ ಬೀಡು ಕರುನಾಡು..!




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




                      - ಹಳ್ಳಿ ಹುಡುಗ ತರುಣ್
                         tharunkumar84@gmail.com




ಭಾನುವಾರ, ಅಕ್ಟೋಬರ್ 31, 2010

ನಾನೇನನ್ನು ಬರೆಯಲಿ ಇಂದು..!



ಕರಾಗುತ್ತಿರುವ ಕಲ್ಪನೆಗಳಲ್ಲಿ

ಬಾಡುತ್ತಿರುವ ಭಾವನೆಗಳಲ್ಲಿ

ನಂದಿಹೋಗಿರುವ ನಂಬಿಕೆಯಲ್ಲಿ

ನಾನೇನನ್ನು  ಬರೆಯಲಿ ಇಂದು...!


ಆಳುತ್ತಿರುವ ಬೆತ್ತಲೆಯ ನಾಯಕರ ನಡುವಲ್ಲಿ

ಕತ್ತಲಾಗುತ್ತಿರುವ ಸಹ್ಯಾದ್ರಿಯ ನಾಡಿನಲ್ಲಿ, 

ಜವಾಬ್ದಾರಿಯ ಅರಿಯದ ಪ್ರಜೆಗಳ ನಡುವೆ

ನಾನೇನನ್ನು ಬರೆಯಲಿ ಇಂದು...!


ಕುದಿಯುತ್ತಿರುವ ಮರ್ಮದಲ್ಲಿ

ಹೊಡೆದಾಡುವ ಕಾಮದಲ್ಲಿ

ಅಂಜಿಕೆಯಿಲ್ಲದ ಆನಂದದಲ್ಲಿ

ನಾನೇನನ್ನು ಬರೆಯಲಿ ಇಂದು...!

               - ಹಳ್ಳಿ ಹುಡುಗ ತರುಣ್
            tharunkumar84@gmail.com  



ಭಾನುವಾರ, ಅಕ್ಟೋಬರ್ 24, 2010

ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ ..............



ನಾನು ಇಷ್ಟ ಪಡುವ
ನನ್ನ ಪ್ರೀತಿಗೆ ಅರ್ಥಕೊಡುವ 
ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ
ನನಗೆ ಇನ್ನು ಸಿಕ್ಕಿಲ್ಲ...!!

ಬರುವ ಸಂಬಳ ನನ್ನ ಜೊಬು
ತುಂಬಲ್ಲ, ನನ್ನ ಬಳಿಯು ಸಾಲದ 
ಕರೆಯೋಲೆಯ ಪತ್ರವಿಲ್ಲ
ಅದು ಅವಳಿಗೆ ಹಿಡಿಸೋಲ್ಲ ....೧

ಮಾಲು-ಗಿಲು ಸುತ್ತೋ ಚಟವು
ನನಗಿಲ್ಲ, ಕಾರು-ಬೈಕು 
ನನ್ನ ಬಳಿ ಮೊದಲೇ ಇಲ್ಲ
ಅದು ಅವಳಿಗೆ ಹಿಡಿಸೋಲ್ಲ ....೨

ಹಿಂದಿ-ಇಂಗ್ಲೀಶ್ ಮತಾಡೋಕ್ಕೆ 
ನನಗೆ ಬರಲ್ಲ, ಪೀಜಾ-ಬರ್ಗರ್ 
ನಾನು ತಿನ್ನಲ್ಲ
ಅದು ಅವಳಿಗೆ ಹಿಡಿಸೋಲ್ಲ....೩

ನಾ ಹಾಕೋ ಬಟ್ಟೆಗೆ ಬಣ್ಣ ಬಳೆದಿಲ್ಲ, 
ಅಂದವ ತಿಳಿಯದ ಕೃತಕ 
ಬದುಕಿನ ಪೇಟೆಯ ಹುಡುಗ ನಾನಲ್ಲ
ಅದು ಅವಳಿಗೆ ಹಿಡಿಸೋಲ್ಲ....೪

ನಾ ಇಷ್ಟ ಪಡುವ
ನನ್ನ ಪ್ರೀತಿಗೆ ಅರ್ಥಕೊಡುವ 
ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ
ನನಗೆ ಇನ್ನು ಸಿಕ್ಕಿಲ್ಲ...!!

                                          - ಹಳ್ಳಿ ಹುಡುಗ ತರುಣ್
                                                          tharunkumar84@gmail.com  


ಶನಿವಾರ, ಅಕ್ಟೋಬರ್ 23, 2010

ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........




   ನಿನ್ನ ಕಣ್ಣಲ್ಲಿ ಕವಿದಿಹ ಪೊರೆಯ
ನಡುವಲ್ಲಿ ಮೂಡಿಹ ಅಹಂ,
   ದ್ವೇಷದ ಭಾವಾದಿ, ಕನಸಿನ ಮೊಹದಿ
    ವಿಷವ ಕಾರುತಿಹ ನಿನ್ನ ಮನಸಿನ ಆಸೆ
               ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........!

ತಾ ಬೆಳೆದರೆ ಎಲ್ಲ,
 ತಾನುಳಿದರೆ ಚೆನ್ನ, ತನಗೆತನೆಲ್ಲಾ 
ತಾನಗಿನ್ಯಾರು ಎನ್ನುತಿಹ       
ನಿನ್ನ ಮನಸಿನ ದುರಹಂಕಾರ
           ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ........!

ಪರರಿಗಪಕಾರವ ಬಯಸಿ
ತನ್ನುಪಕರಕ್ಕೆಂದು ಸ್ವಾರ್ಥದ 
ಅಲೆಗಳಲ್ಲಿ ತೇಲಿ ಆನಂದಿಸುತ 
ನೀ ನುಡಿಯುತ್ತಿರುವ ಸತ್ಯ
              ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........!

ಮದವೇರಿದ ಹುಮ್ಮಸಿನಲ್ಲಿ
ಅಧಿಕಾರದ ಗದ್ದುಗೆಯಲಿ
ಕಷ್ಠವೆಂದು ಬಂದವರ ಲೆಕ್ಕಿಸದೆ
ತನ್ನವರಿಗೆಂದು ಕೂಡಿಟ್ಟ ಹಣ
             ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ.........!


                                                                    - ಹಳ್ಳಿ ಹುಡುಗ ತರುಣ್
                                                          tharunkumar84@gmail.com  

    

ಶನಿವಾರ, ಅಕ್ಟೋಬರ್ 2, 2010

ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....




ನನ್ನ ಜೋಡಿ ನಿನ್ನ ಜೋಡಿ
ಅಪ್ಪ ನೀನು, ಮಗನು ನಾನು
ಕದ್ದು ತಿನ್ನೋದು ಅಂದ್ರೆ
ನಮ್ಮ ಜೋಡಿ ಮುಂದೆ ಎಲ್ಲ ಹಿಂದೆ
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ಗಾಂಧಿ ತತ್ವದಲ್ಲೇ ಬದುಕುವೆನೆಂದು
ಹೇಳುವಂತ ಅಪ್ಪನ ಮಗನು ನಾನು
ಅಪ್ಪನಿಂದ, ಅಪ್ಪಗಾಗಿ, 
ಜೋಡಿ ಎತ್ತು ನಾವು ಹಾಗಿ, 
ಬಡವರ, ಅಧಿಕಾರ ಕೊಟ್ಟವರ 
ಭೂಮಿ ತಿಂದು ಸಿಕ್ಕಿಬಿದ್ದೀವೆಂದು 
ತಿಳಿದರೆ ಮೂರ್ಖರಯ್ಯ ನೀವಿಂದು...
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಾನು  ರಾಘವೇಂದ್ರ, ಅಲ್ಲ ನಾನು
ವಿಜಯೇಂದ್ರ, ತಿಂದರೇನಂತೆ 
ನಮ್ಮ ಅಪ್ಪ ಹೇಳುತ್ತಾರೆ 
ನಮ್ಮ ತಪ್ಪು ಅವರದಲ್ಲದಂತೆ 
ನಮ್ಮ ಅಭಿವೃದ್ದಿಯೇ ಅವರ ಸಾಧನೆಯಂತೆ
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಾನೇ ಜಗದೀಶ ನಮ್ಮಪ್ಪನೆ ನನಗೀಶ
ಅವರು ಟೋಪಿ ತೊಟ್ಟು ಹಿಂದೆ 
ಬರುವುರೆಲ್ಲರಿಗೂ ಟೋಪಿ 
ಹಾಕಲು ನನ್ನ ಬಿಟ್ಟುರು...
ನೂರು ಕೋಟಿ ಮಾಡಿಬಿಟ್ಟೆ
ಕಟ್ಟಾ ಮುಖದಲಿ ಕೆಟ್ಟ 
ಕೊಳೆಯ ತೆಗೆದು ಬಿಟ್ಟೆ..
ಸಿಕ್ಕಿಬಿದ್ದೀವೆಂದು 
ತಿಳಿದರೆ ಮೂರ್ಖರಯ್ಯ ನೀವಿಂದು..
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ಮರೆಯದಿರಿ ಬಲು ಜೋಡಿಗಳಲ್ಲಿ 
ನಮ್ಮನು, ನಾನೇ ರಾಮಚಂದ್ರ 
ನನ್ನ ಮಗನೆ ಸಪ್ತಾಗಿರಿ 
ನಾವು ಹಾಕಿಕಟ್ಟಿದ ಕಟ್ಟೆಗೆ 
ನಾವೇ ಬಿದ್ದೇವೆಂದು ತಿಳಿದಿದ್ದರೆ
ಮೂರ್ಖರಯ್ಯ ನೀವಿಂದು....
ನಮ್ಮಗೆಲ್ಲ  ಅಭಿವೃದ್ದಿಯ ಮಾಡಲೆಂದು
ಕಣ್ಣೀರು ಇಟ್ಟು ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಮ್ಮ ಜೋಡಿ ಸೇರುವರನ್ನ ಕಾದುನೊಡಿ 
ಅಂದು ತುಪ್ಪವಿಟ್ಟ ಅಪ್ಪನನ್ನೆ 
ಏನು ಮಾಡಲಾಗಲಿಲ್ಲ, ಇನ್ನು
ನಮ್ಮ ಜೋಡಿಯನ್ನು ಯಾರು
ಬೇರೆ ಮಾಡಿಯಾರು.....
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

                           - ಹಳ್ಳಿ ಹುಡುಗ ತರುಣ್
                       tharunkumar84@gmail.com